Saturday, August 7, 2010

ಎಲ್ಲಿದೆ ಶಾಂತಿ???????????????

ಇಂಡಿಯಾ-ಪಾಕಿಸ್ತಾನ್ "AMAN KI AASHA" ಕಾರ್ಯಕ್ರಮದ ಬಗ್ಗೆ ಒದ್ತಾ ಇದ್ದೆ. ಎನಾದ್ರು ಬರೆಯೊಣ ಅನ್ನುಸ್ತು. ಓದಿ ಹೇಳಿ ಹೇಗಿದೆ ಅಂತ.

ಶಾಂತಿ ಎಂಬುದು ಬರೀ ಧರಿಸುವುದಲ್ಲ ಬಿಳೀ ವಸ್ತ್ರ
ಅಗತ್ಯವಾದ ಮನಃಶಾಂತಿ ನೀಡುವ ಅಸ್ತ್ರ
ಶಾಂತಿಯು ಅಹಿಂಸೆಯ ಮತ್ತೊಂದು ಪರಿ
ಪಾಲಿಸಿದರೆ ನಡೆಯುವುದು ಎಲ್ಲವೂ ಸರಿ

ಶಾಂತಿ ಭಯವನ್ನು ಹೊಗಲಾಡಿಸುವ ಮಂತ್ರ
ಅಸಾಧ್ಯವಾದುದನ್ನು ಸಾಧಿಸುವ ಉಪಾಯವಾದ ತಂತ್ರ

ಶಾಂತಿ ಪ್ರಾಮಾಣಿಕತೆಯನ್ನು ಮೆರೆಸುವ ರೀತಿ
ಕ್ಷಣದಲ್ಲಿ ಒಡೆದು ಹೋಗಬಹುದಾದಂತ ಆಕೃತಿ
ಶಾಂತಿ ಅಪನಂಬಿಕೆಯನ್ನು ಹೋಗಲಾಡಿಸುವ ಸೂತ್ರ
ಸಂಕೀರ್ಣ ಸಂದೇಶವಿರುವ ಅಮೂಲ್ಯವಾದ ಪತ್ರ

ಶಾಂತಿ ದ್ವೇಷ ಅಸೂಯೆಗಳ ಕೊನೆಗಾಣಿಸುವ ಮಿತ್ರ
ಇದ ಮುರಿಯಲು ಮಾಡುವರು ದುಷ್ಕರ್ಮಿಗಳು ಹಲವಾರು ಕುತಂತ್ರ

ಶಾಂತಿ ಶಾಂತಿ ಎಂದು ಬೊಬ್ಬೆ ಹೊಡೆಯುವವರ ಮನದಲ್ಲಿ ಬರೀ ಭ್ರಾಂತಿ
ಭ್ರಾಂತಿಗಳ ಸರೆಮಾಲೆಗಳಿಂದ ಮೂಡಿದೆ ಎಲ್ಲೆಡೆ ಅಶಾಂತಿ
ಅಶಾಂತಿಯಿಂದ ಕದಡಿದೆ ಎಲ್ಲರ ಮನಃಶಾಂತಿ
ನಡೆಯಲಿ ಶಾಂತಿ ಭದ್ರತೆಗೆ ಅಹಿಂಸೆಯಂಬ ಪರಿಣಾಮಕರ ಕ್ರಾಂತಿ
ಪಡೆಯಲಿ ಹಿಂಸೆ ಪ್ರಚೋದೆಸುವ ಕೆಟ್ಟ ಸಂತತಿಗಳು ವಿಶ್ರಾಂತಿ

ಶಾಂತಿಯೇ ಭಾರತದ ಇಂಪಾದ ಶೃತಿ
ಬಾಡದಿರಲಿ ಹೂವಿನಂತೆ ಕಂಗೊಳಿಸುತ್ತಿರುವ ಭಾರತ ಮಾತೆಯ ಕಾಂತಿ

ಇಂತಿ ನೆಮ್ಮ ಪ್ರೀತಿಯ
ಶಾಂತಿ ಯಾಚಕ
ಪ್ರದೀಪ

ಜೀವನ!!!!!!!!!!!!

ಜೀವನ!!!!!! ಈ ಪದದಲ್ಲಿ ಇರೋದು ಮೂರೆ ಅಕ್ಷರ. ಆದರೆ ಎಷ್ಟು ಅರ್ಥ, ಎಷ್ಟು ಅನರ್ಥಗಳಿವೆ ಅಲ್ವ. ಆರಾಮಾಗಿ ಇರ್ಬೇಕಾದ ಜೀವನ್ದಲ್ಲಿ, ನಾವೆ ಸುಮ್ನೆ ಬೆಡ್ದಲೆ ಇರೊ ವಿಷಯಗಳ ಸುಳಿಲಿ ಸಿಕ್ಕಿ ಒದ್ದಾಡ್ತೀವಿ. ನಮ್ಗೆ ಎನ್ ಎನ್ ಆಗುತ್ತೆ ಅನ್ನೊಕ್ಕಿಂತ, ಅದುನ್ನ ನಾವ್ ಹೇಗೆ ನೊಡ್ತೀವಿ, ತೊಗೋತೀವಿ ಅನ್ನೊದು ಮುಖ್ಯ. ನಾನು ಜೀವನಾನ ಒಂದು ಕ್ರಿಕೇಟ್ ಪಂದ್ಯಕ್ಕೆ ಹೊಲಿಸಿ ಬರೆಯೊಕ್ಕೆ ಪ್ರಯತ್ನಪಟ್ಟಿದ್ದೀನಿ. ಎಲ್ಲಾ ಚಿಂತೆಗಳ್ನ ಸ್ವಲ್ಪ ಹೊತ್ತು ಮರ್ತು ಆರಾಮಾಗಿ ಓದಿ.


ಜೀವನವೆಂಬ ಪಂದ್ಯ

ಜೀವನ ಒಂದು ಕ್ರಿಕೆಟ್ ಪಂದ್ಯವಿದ್ದಂತೆ
ಎಲ್ಲರ ಹೃದಯಗಳು ಒಂದೊಂದು ಮೈದಾನದಂತೆ
ಕನಸುಗಳು ನಮ್ಮನು ಹುರಿದುಂಬಿಸುವ ಪ್ರೇಕ್ಷಕರಂತೆ
ಸಕಲವನ್ನು ನಿರ್ಧರಿಸುವ ಆ ವಿಧಿಯೇ ತೀರ್ಪುಗಾರರಂತೆ

ಸೋಲು ಗೆಲುವೆಂಬ ಸಿಹಿ ಕಹಿಗಳ ಮಿಶ್ರಣವೇ ಈ ಬಾಳು
ಅರಿಯದಿದ್ದರೆ ಈ ಮರ್ಮ, ಜೀವನವಾಗುವುದು ಬರೀ ಗೋಳು


ಅವಕಾಶಗಳು ದೇವರು ನೀಡುವ ಅಮೂಲ್ಯವಾದ ವರಗಳಂತೆ
"ಸದಾ ಗೆಲುವು ನನ್ನದೇ" ಎಂದು ತಿಳಿಯುವುದು ಹುಚ್ಚು ಭ್ರಾಂತಿಗಳಂತೆ
ಶತಕ ಬಾರಿಸುವುದು ಕಟ್ಟಿದ ಕನಸುಗಳ ನನಸಾಗಿಸಿದಂತೆ
ಪರಿಶ್ರಮವಿದ್ದರೆ ಗೆಲುವೆಂಬುದು ಹಿಂಬಾಲಿಸುವುದು ನೆರಳಿನಂತೆ

ಪರರ ಸಂತೋಷದಲ್ಲಿ ನಮ್ಮನ್ನು ಕಾಣುವುದೇ ಈ ಜೀವನ
ಸಂಘಟಿತ ಸಂಚಲನದಿಂದ ವಿಜಯ ಪಥಾಕೆ ಹಾರಿಸಿದರೆ ಜೀವನವಾಗುವುದು ಪಾವನ


ಸೋಲುಗಳು ಬರುವುದು ಮಳೆ ಹನಿಗಳಂತೆ
ಹಿಮ್ಮೆಟ್ಟಿಸಿ ನಿಲ್ಲುವವನಾಗುವನು ಆದರ್ಶ ಪುರುಶನಂತೆ
ಉಧ್ದಟತನದಿಂದ ಹಾಳಾಗುವುದು ವೈಯಕ್ತಿಕ ಬದುಕನ್ನು ಬಲಿಕೊಟ್ಟಂತೆ
ಸಂಪಾದಿಸಿದ ಕಲೆಯನ್ನು ಅನಾಮಿಕನಿಗೆ ಒಪ್ಪಿಸುವುದು ಬಾಜಿ ಕಟ್ಟಿದಂತೆ

ಪ್ರೀತಿ ವಿಶ್ವಾಸಗಳಿಂದ ಕೀರ್ತಿ ಸಂಪಾದಿಸುತ ನಡೆದರೆ ಸ್ವರ್ಗವೆಂಬ ಪಂದ್ಯ ಶ್ರೇಷ್ಠ ಬಹುಮಾನ
ದಾರಿ ತಪ್ಪಿದರೆ ಬಂದೇಬರುವುದು ಯಮನ ನರಕವೆಂಬ ಆಯ್ಕೆ ಸಮಿತಿಯಿಂದ ಆಹ್ವಾನ


ಇಂತಿ ನಿಮ್ಮ ಪ್ರೀತಿಯ
ಪ್ರದೀಪ